ಉಜ್ಜೈನಿಯ ವಾಲ್ಮೀಕಿ ಧಾಮಕ್ಕೆ ಕಜಾಪ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಭೇಟಿ
ಉಜ್ಜಯಿನಿ : ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಎಸ್. ಬಾಲಾಜಿ ಅವರು ಮಧ್ಯಪ್ರದೇಶ ಭೇಟಿ ವೇಳೆ ಜೈ ಮಹಾಕಾಲೇಶ್ವರ ವಿಶೇಷ ದರ್ಶನ ಪಡೆದ ನಂತರ ೧೬೦ ಎಕರೆಯಲ್ಲಿ ಸ್ಥಾಪಿತವಾದ ವಾಲ್ಮೀಕಿ ದಾಮ್ ಎಂಬ ಮಠಕ್ಕೆ ಭೇಟಿ ನೀಡಿ ಅಲ್ಲಿಯ ಮಠಾಧೀಶರು ಹಾಗೂ ರಾಜ್ಯಸಭಾ ಸದಸ್ಯರಾದ ಪೂಜ್ಯ ಶ್ರೀ ಉಮೇಶ್ನಾಥ್ ಮಹಾರಾಜರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಅವರನ್ನು ಕರ್ನಾಟಕದ ಪರವಾಗಿ ಗೌರವಿಸಿ ಅಭಿನಂದಿಸಿದರು. ಸ್ವಾಮೀಜಿ ಹಾಗೂ ಸಂಸದರಾದ ಉಮೇಶ್ ನಾಥ್ ಮಹಾರಾಜರು ಮಾತನಾಡಿ ಮಧ್ಯಪ್ರದೇಶ ಜಾನಪದ ಗೀತೆ ಪ್ರಕಾರಗಳಲ್ಲಿ ಧಾರ್ಮಿಕ ಭಾವನೆಗಳು ಅಡಗಿವೆ, ಸ್ಥಳೀಯ ದೇಸಿ ಕಲೆಗಳನ್ನು ಉಳಿಸುವ ಕಾರ್ಯಗಳಲ್ಲಿ ಮಧ್ಯಪ್ರದೇಶ ಸರಕಾರ ತೊಡಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಧ್ಯಪ್ರದೇಶ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಕೇಶ್ ಶರ್ಮ ಮಾತನಾಡಿ, ಒಕ್ಕೂಟದ ವತಿಯಿಂದ ಯುವ ಜನರಿಗೆ ದೇಶಿ ಕಲೆಗಳ ತರಬೇತಿಯನ್ನು ಪ್ರದರ್ಶನಕ್ಕೆ ವೇದಿಕೆಗಳನ್ನು ನೀಡಲಾಗುತ್ತಿದೆ ಪ್ರಸ್ತುತ ರಾಜ್ಯದ ಪ್ರತಿ ಗ್ರಾಮದಲ್ಲಿ ಲೋಕ ಕಲಾ ಸಂಘಗಳನ್ನು ಸ್ಥಾಪಿಸಲಾಗುವುದು ತಿಳಿಸಿದರು.
ಇಂಡೂರಿನ ನಿತೇಶ್ ದೂಬೆ, ಆರೋಗ್ಯ ಇಲಾಖೆಯ ತರುಣ್ ರಾಥೋಡ್, ಮಾತೃಭೂಮಿ ಸಂಘದ ವಿನೋದ್ ಸೋನಿ, ಕರ್ನಾಟಕದ ಧಾರವಾಡ ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿ ಸದಾನಂದ ಎಮ್. ಉಪಸ್ಥಿತರಿದ್ದರು.